ರಾಮು ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ೩೨ನೇ ಅದ್ದೂರಿ ಚಿತ್ರ ವೀರ ಚಿತ್ರದ ಡಿ.ಟಿ.ಎಸ್. ಕಾರ್ಯವು ಇತ್ತೀಚೆಗೆ ನಗರದ ಮಂಜರಿ (ರಾಜನ್) ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು.
ಚಿತ್ರವು ಜನವರಿಯಲ್ಲಿ ತೆರೆಗೆ ಬರಲಿದ್ದು, ೨೦೧೩ರ ಶ್ರೀಮಂತ ಚಿತ್ರಗಳ ಸಾಲಿನಲ್ಲಿ ನಿಲ್ಲುವುದರಲ್ಲಿ ಎರಡು ಮಾತಿಲ್ಲ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.
ಚಿತ್ರಕ್ಕೆ ಅನಿಲ್ಕುಮಾರ್ (ಶಕ್ತಿ ಖ್ಯಾತಿ) ಸಂಭಾಷಣೆ, ರಾಜೇಶ್ ಕಟ್ಟಾ ಛಾಯಾಗ್ರಹಣ, ಹಂಸಲೇಖಾ ಸಾಹಿತ್ಯ ಸಂಗೀತ, ಇಸ್ಮಾಯಿಲ್ ಕಲೆ, ಇಮ್ರಾನ್ ಸರ್ದಾರಿಯಾ ನೃತ್ಯ, ಶರಣ್ ಗದ್ವಾಲ್, ಮಂಜು ನಿರ್ದೇಶನ-ಸಹಕಾರ, ರವಿವರ್ಮ, ಪಳನಿರಾಜ್ ಸಾಹಸ, ಲಕ್ಷ್ಮಣ್ರೆಡ್ಡಿ ಸಂಕಲನವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಅಯ್ಯಪ್ಪ.ಪಿ ಶರ್ಮ,
ತಾರಾಗಣದಲ್ಲಿ ಮಾಲಾಶ್ರೀ, ಕೋಮಲ್, ಅಶಿಷ್ ವಿದ್ಯಾರ್ಥಿ, ರಾಹುಲ್ದೇವ್, ಮುಕುಲ್ದೇವ್, ಸತ್ಯ (ಹೈದ್ರಾಬಾದ್) ರಾಜು ತಾಳಿಕೋಟೆ, ಸಿ.ಆರ್.ಸಿಂಹ, ಎಂ.ಎನ್. ಲಕ್ಷ್ಮೀದೇವಿ, ಅನಂತವೇಲು, ಮೇಕ್ (ಬಾಲುವುಡ್ ಖ್ಯಾತಿಯ) ಹಾಗೂ ಹಾಲಿವುಡ್ನ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.